Thursday, August 23, 2012

ಇವರಿಗೆಲ್ಲಾ ಗೌಂಡಿ ಧಾಮವೇ ಗತಿ(ಹೀಗೊಂದು ಗೌಂಡಿಧಾಮ ಪ್ಯಾಸೆಂಜರ್ ರೈಲು)


ಪ್ರಯಾಣಿಕರ ಗಮನಕ್ಕೆ... ಚಿಕ್ಕಜಾಜೂರು ಹುಬ್ಬಳ್ಳಿ ಪ್ಯಾಸಿಂಜರ್ ಗಾಡಿಯು 60 ನಿಮಿಷ ತಡವಾಗಿಬರಲಿದೆ ಎಂಬ ಘೋಷಣೆಯನ್ನು ಕೇಳಿದರೆ ಹುಬ್ಬಳ್ಳಿಯ ಉದ್ಯಮಿಗಳು, ಗುತ್ತೆಗೆದಾರರು, ಗ್ರಾಹಕರು, ಕಂಪನಿಗಳು ದಾರಿಕಾಣದೆ, ಕಂಗಾಲಾಗುತ್ತಾರೆ. ಏಕೆಂದರೆ ಇವರೆಲ್ಲಾ ಈಗಾಡಿಯಲ್ಲಿ ಬರುವ ಕೂಲಿಕಾರ್ಮಿಕರು, ವರ್ತಕರನ್ನೆ ಅವಲಂಭಿಸಿರುತ್ತಾರೆ.
 ಹೌದು, ಹುಬ್ಬಳ್ಳಿ ಇಂದು ಎಲ್ಲ ರಂಗಗಳಲ್ಲಿ ಬೆಳೆಯುತ್ತಿದೆ. ಈ ಬೆಳವಣಿಗೆಯಿಂದಾಗಿ ವಿಪುಲ ಉದ್ಯೋಗ ಅವಕಾಶಗಳು ಸೃಷ್ಟಿ ಯಗಿದ್ದು ಸಾಕಷ್ಟು ಜನ ತುತ್ತಿನ ಚೀಲ ತುಂಬಿಕೊಳ್ಳುವಂತಾಗಿದೆ. ಒಂದೇ ಒಂದು ದಿನ ಕೆಲಸಕ್ಕೆ ಹೊಗದಿದ್ದರೆ ಎಷ್ಟೋ ಕುಟುಂಬಗಳು ಊಟ ಮಾಡುವಂತಿಲ್ಲ. ಅಂತಹ ಎಷ್ಟೋ ಕುಟುಂಬಗಳು ಹುಬ್ಬಳ್ಳಿಯ ಸುತ್ತ ಮುತ್ತ ಜೀವನ ಸಾಗಿಸುತ್ತಿವೆ.
 ಇಂತಹ ಹಳ್ಳಿಗಳಲ್ಲಿ ಪ್ರಮುಖವಾದುವುಗಳು ಹುಬ್ಬಳ್ಳಿ ಬೆಂಗಳೂರು ರೈಲು ಮಾರ್ಗದಲ್ಲಿ ಬರುವ ಕರ್ಜಗಿ,ಯಲವಿಗಿ, ಸವಣೂರು, ಗುಡಗೇರಿ ಹಾಗೂ ಸಂಶಿ. ಇವುಗಳನ್ನು ಹುಬ್ಬಳ್ಳಿಗೆ ಸಂಪರ್ಕಿಸುವ ಪ್ರಮುಖ ರೈಲು ಎಂದರೆ ಚಿಕ್ಕಜಾಜೂರು ಹುಬ್ಬಳ್ಳಿ ಪ್ಯಾಸಿಂಜರ್.ತಮ್ಮ ನಿತ್ಯ ಬದುಕಿಗೆ ಉದ್ಯೋಗ ಅರಸಿ ಹುಬ್ಬಳ್ಳಿಗೆ ಬರುವ ಅನೇಕ ಕೂಲಿಕಾರ್ಮಿಕರು,ಗೃಹ ನಿರ್ಮಾಣ ಕಾರ್ಮಿಕರು,ನೌಕರಸ್ಥರು, ವಿದ್ಯಾರ್ಥಿಗಳು ಹಾಗೂ ಇನ್ನೂ ಅನೇಕರು ಹುಬ್ಬಳ್ಳಿಗೆ ಬರಬೇಕಾದರೆ ಈ ರೈಲ್ವೆ ಯನ್ನು ಅವಲಂಬಿಸಿದ್ದಾರೆ.
 ಗೌಂಡಿಧಾಮ ಪ್ಯಾಸೆಂಜರ್
 ಪ್ರತಿಯೊಂದು ರೈಲಿಗೂ ಒಂದೊಂದು ಹೆಸರಿನಿಂದ ಕರೆಯಲಾಗುತ್ತದೆ. ರಾಣಿಚೆನ್ನಮ್ಮಾ, ಶರಾವತಿ, ಚಾಲುಕ್ಯ, ಅಮರಾವತಿ, ಹಂಪಿ ಎಕ್ಸ್‌ಪ್ರೆಸ್ ಇಂತಹ ಹೆಸರುಗಳನ್ನು ಇಲಾಖೆ ಇವುಗಳಿಗೆ ಇಟ್ಟಿರುತ್ತದೆ.
 ಆದರೆ ಹುಬ್ಬಳ್ಳಿ ಚಿಕ್ಕಜಾಜೂರು ಪ್ಯಾಸೆಂಜರ್ ಗಾಡಿಗೆ ಗೌಂಡಿಧಾಮ ಎಂದು ಅಲ್ಲಿಯ ಪ್ರಯಾಣಿಕರು ಕರೆಯುತ್ತಾರೆ. ಏಕೆಂದರೆ ಈ ರೈಲಿನಲ್ಲಿ ಮುಕ್ಕಾಲು ಭಾಗ ಗೌಂಡಿಗಳೇ ತುಂಬಿರುತ್ತಾರೆ.
 ಹುಬ್ಬಳ್ಳಿಗೆ ಹೋಗಲು ರೈಲೇ ಯಾಕೆ?
 ಏಕೆಂದರೆ ಹುಬ್ಬಳ್ಳಿಗೆ ಬರುವ ಎಷ್ಟೋ ದುಡಿಯುವ ವರ್ಗದ ಜನರಿಗೆ ತಮ್ಮ ಹಳ್ಳಿಗಳಿಂದ ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಇದ್ದರೂ ಅದು ಅತೀ ದುಬಾರಿ. ಬಸ್ ಪ್ರಯಾಣ ಪ್ರತಿ ಕಿ.ಮೀ.ಗೆ 75 ಪೈಸೆಯಿಂದ ಒಂದು ರೂಪಾಯಿವರೆಗೂ ತಗುಲುತ್ತದೆ. ಆದರೆ ಅದೇ ರೈಲು ಪ್ರಯಾಣ ಪ್ರತಿ ಕಿ.ಮೀ.ಗೆ 25 ಪೈಸೆ ಮಾತ್ರ. ರೈಲಿನ ತಿಂಗಳ ತಿಂಗಳ ಪಾಸ್‌ನ್ನು ಕೊಂಡರೆ ಶೇ. 60 ರಷ್ಟು ಪ್ರಯಾಣ ದರವನ್ನು ಉಳಿಸಬಹುದು.
 ಇಜ್ಜತ್‌ಪಾಸ್
 ನಿತ್ಯ ಹುಬ್ಬಳ್ಳಿಗೆ ಬರುವ ಕೂಲಿ ಕಾರ್ಮಿಕರಿಗೆ ನೀಡುವಂತಹ ಈ ಪಾಸ್‌ನ ಬೆಲೆ ಕೇವಲ 25 ರೂ. ತಿಂಗಳಿಗೆ ಆದರೆ ಇದಕ್ಕೆ ಕೆಲವು ಷರತ್ತುಗಳಿವೆ.
 ಪ್ರಯಾಣಿಕರಿಗೆ ಸ್ವಲ್ಪ ತೊಂದರೆ
 ಈ ಟ್ರೈನಿನ ಸಮಯವನ್ನು ಕೆಲ ತಿಂಗಳ ಹಿಂದೆ ಪರಿಷ್ಕರಿಸಲಾಗಿದೆ. ಮೊದಲು ಈ ರೈಲಿನ ಸಮಯವೆಂದರೆ ಬೆಳಗ್ಗೆ 5.30ಕ್ಕೆ ಚಿಕ್ಕಜಾಜುರಿನಿಂದ ಹೊರಟು ಬೆಳಗ್ಗೆ 9ಕ್ಕೆ ಹುಬ್ಬಳ್ಳಿಯನ್ನು ಸೇರುತ್ತಿತ್ತು. ಆದರೆ ಸಮಯ ಪರಿಷ್ಕರಣೆ ಮಾಡಿದ್ದರಿಂದ 4.30ಕ್ಕೆ ಚಿಕ್ಕಜಾಜೂರಿನಿಂದ ಹೊರಟು 8ಕ್ಕೆ ಹುಬ್ಬಳ್ಳಿಯನ್ನು ಸೇರುತ್ತದೆ. ಇದರಿಂದಾಗಿ ಕೆಲ ಕೂಲಿಕಾರ್ಮಿಕರಿಗೆ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ.
 ಹುಬ್ಬಳ್ಳಿಯ ಕ್ಷೀರ ಧಾರೆ
 ನಿತ್ಯವೂ ಸಾವಿರಾರು ಕುಟುಂಬಗಳು ಅನೇಕ ಹೊಟೇಲ್‌ಗಳು ಈ ರೈಲಿಗಾಗಿ ಕಾಯುತ್ತಾರೆ ನೋಡುತ್ತಾರೆ. ಸುತ್ತಮುತ್ತಲಿನ ಕೆಲವು ಹಳ್ಳಿಗಳಿಂದ ಬರುವ ಹಾಲು ಮಾರುವವರು ಈ ರೈಲಿಗೆ ಬಂದು ಹುಬ್ಬಳ್ಳಿಗೆ ದಿನ ನಿತ್ಯ ಹಾಲು ಪೂರೈಸುತ್ತಾರೆ. ಈ ರೈಲು ಏನಾದರೂ ತಡವಾಗಿ ಬಂದರೆ ಅವರ ಚಹಾಕ್ಕೆ ತೊಂದರೆಯಾಗುತ್ತದೆ. ಮನೆಯಿಂದ ನೇರವಾಗಿ ಹಾಲು ತಂದು ಕೊಡುತ್ತಾರೆ. ಪ್ಯಾಕೆಟ್ ಹಾಲಿಗೆ ಹೋಲಿಸಿದರೆ ಶುದ್ದವೂ ಹೌದು. ಕಡಿಮೆ ಬೆಲೆಯೂ ಹೌದು.


 ಇವ್ರ ಹೀಗೆ ಹೇಳ್ತಾರೆ....
 ನಾವು ನಿತ್ಯ 50-65 ಲೀ. ಹಾಲನ್ನು ಹುಬ್ಬಳ್ಳಿಗೆ ತಂದು ಹಾಕುತ್ತೇವೆ. ಇದು ನಮಗೆ ಒಂದು ಉದ್ಯೋಗವನ್ನು ನೀಡಿದಂತಾಗಿದೆ. ಮದ್ಯಾಹ್ನ ದವರೆಗೂ ಈ ಕೆಲಸ ಮಾಡಿ, ನಂತರ ಇನ್ನೊಂದು ಗಾಡಿಗೆ ನಮ್ಮೂರಿಗೆ ಹೋಗಿ ನಮ್ಮ ಕೆಲಸ ಮಾಡುತ್ತೇವೆ.
 –ಚನ್ನಪ್ಪ , ಸಂಶಿ(ಹಾಲು ಮಾರುವವರು)
 ಹುಬ್ಬಳ್ಳಿಯಲ್ಲಿ ನಮಗೆ ಎರಡು ರೀತಿಯ ಕೆಲಸಗಳಿವೆ. ಕಾಯಂ ಆಗಿ ಹೋದರೆ 150ರಿಂದ 170ವರೆಗೂ ರೂ. ಸಂಬಳ ಸಿಗುತ್ತವೆ. ದಿನಗೂಲಿಯಂತೆ ಹೋದರೆ ರೂ. 200ವರೆಗೂ ಸಿಗುತ್ತದೆ. ಆದ್ದರಿಂದ ನಾವು ಹುಬ್ಬಳ್ಳಿಗೆ ಬರುತ್ತೇವೆ.
  -ಬಸವರಾಜ,ಗುಡಗೇರಿ (ಗೌಂಡಿ)



No comments:

Post a Comment